• ನಾಯಕ ಜನಾಂಗದ ಇತಿಹಾಸ


"ಮಹಿಷ" (ಎರುಮೈ/ಎಮ್ಮೆ) ಎಂಬುದು ಹಳೇ ಮೈಸೂರು ಭಾಗದ ಮೂಲ ನಿವಾಸಿಗಳಾದ "ತೊರೆಯರ್ ನಾಯಕ" ಜನಾಂಗದ ಪ್ರಮುಖ ಉಪ-ಪಂಗಡ. ಈ ಸಮುದಾಯದಲ್ಲಿ ಹಲವಾರು ಉಪಪಂಗಡಗಳಿದ್ದು, 'ಮಹಿಷ' ಕುಲವು ಪ್ರಮುಖವಾಗಿದೆ. ಈ ಮಹಿಷ ಕುಲದ ಅರಸರು ಮೈಸೂರು ಭಾಗವನ್ನು ಪ್ರಾಚೀನ ಕಾಲದಿಂದಲೂ ಆಳ್ವಿಕೆ ಮಾಡಿಕೊಂಡು ಬಂದಿರುವರು. ಪಶ್ಚಿಮ ಬಂಗಾಳ ರಾಜ್ಯದಲ್ಲಿಯೂ ಈ ತೊರೆಯರ್ ಸಮುದಾಯವಿದ್ದು "ನಿಷಾದ ಕುಲ"ದ (ಬೇಡರು) ಪ್ರಮುಖ ಉಪಪಂಗಡವಾಗಿದೆ. ಅಲ್ಲಿಯೂ "ಮಹಿಷ" ಎಂಬುದು ಈ ಸಮುದಾಯದ ಪರ್ಯಾಯ ಪದವಾಗಿದೆ. ಇದೇ "ಮಹಿಷ" ಕುಲವು ಕರ್ನಾಟಕದ ಬೇಡರಲ್ಲಿಯೂ ಇದ್ದು, ಅಲ್ಲಿ "ಎನುಮಲೋರು" ಎಂದಾಗುತ್ತದೆ. ತೊರೆಯರ್ ಸಮುದಾಯದ ಪ್ರಾಚೀನ ಉಲ್ಲೇಖವು ತಮಿಳಿನ ಸಂಘಂ ಸಾಹಿತ್ಯದಲ್ಲಿ ಇದ್ದು, ಅಲ್ಲಿ ಇವರನ್ನು "ತಮಿಳುನಾಡಿನ ಮೇಲೆ ದಾಳಿ ಮಾಡಿದ ಎರುಮೈನಾಡು/ಮೈಸೂರಿನ ಮುತ್ತೊರೆಯರ್" ಎಂದು ಮತ್ತು "ಚೋಳ ರಾಜನೆತನದ ಸಂಸ್ಥಾಪಕರಾದ ಇವರು ಮೂಲತಃ ಬಂಗಾಳದ ನಾಗವಂಶದ ಒಂದು ಶಾಖೆ" ಎಂಬುದಾಗಿ ಉಲ್ಲೇಖಿಸಲಾಗಿದೆ ಎಂದು ವಿ.ಕನಕಸಭಾಯ್ ಅವರು ತಮ್ಮ "The Tamils Eighteen Hundred Years Ago, 1904" ಕೃತಿಯಲ್ಲಿ ತಿಳಿಸಿದ್ದಾರೆ. ಮೈಸೂರು ನಾಯಕ ಸಮುದಾಯದ ಬಗ್ಗೆ ದೇವಿಚಂದ್ರನು ತನ್ನ 'ರಾಜಾವಳಿ ಕಥಾಸಾರ'ದಲ್ಲಿ ಉಲ್ಲೇಖಿಸಿದ್ದು, ಮೈಸೂರು-ಹಾಸನ-ಚಾ.ನಗರ ಭಾಗಗಳಲ್ಲಿ ಇವರು ಮೂರು ರಾಜ್ಯಗಳನ್ನು ನಿರ್ಮಿಸಿದರು ಎಂದು ತಿಳಿಸುತ್ತಾನೆ. ನಂತರ ಹೊಯ್ಸಳ-ವಿಜಯನಗರ ಕಾಲದಲ್ಲಿ ಈ ಸಮುದಾಯದ ಅರಸರು ಮೈಸೂರು ಭಾಗದ ಒಟ್ಟು ಹದಿನಾರು ಪ್ರಾಂತ್ಯಗಳನ್ನು (ಎಲ್ಲಾ ಶಾಸನಗಳಲ್ಲೂ 'ತೊರೆಯನಾಡು' ಎಂದೇ ಉಲ್ಲೇಖಿಸಿರುವುದು ಗಮನಾರ್ಹ) ಆಳ್ವಿಕೆ ಮಾಡಿದ್ದು, ಇಂದಿನ 'ಯಳಂದೂರು' ಪಟ್ಟಣ ಇವುಗಳ ಕೇಂದ್ರವಾಗಿತ್ತು. ಇವರೆಲ್ಲರೂ ಮೂಲತಃ 'ತಲಕಾಡು ಗಂಗ'ರ ಸಂಬಂಧಿಗಳಾಗಿದ್ದು, ಜೈನ ಧರ್ಮದ ಪ್ರಭಾವದಲ್ಲಿದ್ದವರಾಗಿದ್ದರು. ಈ ಹದಿನಾರು ಪ್ರಾಂತ್ಯಗಳಲ್ಲಿ ಒಂದು 'ಕಾರುಗಹಳ್ಳಿ ಸಂಸ್ಥಾನ'. ಈ ಕಾರುಗಹಳ್ಳಿ ಸಂಸ್ಥಾನವು ಚಾಮುಂಡಿ ಬೆಟ್ಟಕ್ಕೆ ಹೊಂದಿಕೊಂಡಂತೆ ಪೂರ್ವ ದಿಕ್ಕಿಗೆ ಇತ್ತು (ಮೈಸೂರು ಚಾಮುಂಡಿ ಬೆಟ್ಟದ ಪಶ್ಚಿಮ ದಿಕ್ಕಿಗೆ ಹೊಂದಿಕೊಂಡಂತೆ ಇರುವ ಪಟ್ಟಣ). ಕಾರುಗಹಳ್ಳಿಯ ದೊರೆಗಳು ಮಹಾಬಲೇಶ್ವರನ ಪರಮ ಭಕ್ತರಾಗಿದ್ದು, ಮಹಾಬಲಾದ್ರಿ (ಇಂದಿನ ಚಾಮುಂಡಿ ಬೆಟ್ಟ) ಯಲ್ಲಿ "ಮಹಾಬಲೇಶ್ವರ ಮತ್ತು ವಾಸಂತಿಕಾದೇವಿ" ಎಂಬ ಜೈನ ಯಕ್ಷಿಣಿ ದೇವತೆಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರು. ನಂತರದಲ್ಲಿ ಇವರು 33 ಹಳ್ಳಿಗಳ ಪಾಳೆಯಪಟ್ಟಾಗಿದ್ದ ಮೈಸೂರನ್ನು ವಶಪಡಿಸಿಕೊಳ್ಳುತ್ತಾರೆ. ಈ ಮನೆತನದ ಕೊನೆಯ ದೊರೆ "ಮಾರನಾಯಕ". ಈತನು ವಶಪಡಿಸಿಕೊಂಡ ಮೈಸೂರಿನಲ್ಲಿ ಕೆಲವು ಸಾಮಾಜಿಕ-ಧಾರ್ಮಿಕ ಸುಧಾರಣೆಗಳನ್ನು ತರಲು ಪ್ರಾರಂಭಿಸುತ್ತಾನೆ. ಅವುಗಳಲ್ಲಿ ಮುಖ್ಯವಾದವು, 1) ಪ್ರತಿಯೊಂದು ಗ್ರಾಮಗಳ ಮಧ್ಯದಲ್ಲಿ " ಮಾರಿ" ದೇವತೆಗಳ ಸ್ಥಾಪನೆ 2) ಈ ದೇವಾಲಯಗಳಿಗೆ ದಲಿತ ಎಡಗೈ ಮತ್ತು ಬಲಗೈ ಸಮುದಾಯಗಳ ಪ್ರವೇಶ ಮತ್ತು 3) ಪ್ರಮುಖವಾಗಿ ಮೈಸೂರು ಭಾಗದಲ್ಲಿ ಅಲ್ಲಿಯವರೆಗೂ ಆಚರಣೆಯಲ್ಲಿದ್ದ "ನರಬಲಿ" ರದ್ಧತಿ. ಈ ಸುಧಾರಣೆಗಳಿಂದಾಗಿ ತಮ್ಮಗಳ ಸ್ವಹಿತಾಸಕ್ತಿಗೆ ಧಕ್ಕೆ ಉಂಟಾಗಿದ್ದರಿಂದ ಮೈಸೂರಿನ ಮೇಲ್ವರ್ಗಗಳ ಜನರು ನೂತನ ಆಡಳಿತದ ವಿರೋಧಿಗಳಾಗುತ್ತಾರೆ. ಈ ಮೇಲ್ವರ್ಗದ ಜನರು ಅದಾಗಲೇ ಸಂಸ್ಥಾನ ಕಳೆದುಕೊಂಡು, ಅಸಮಾಧಾನಗೊಂಡಿದ್ದ ಮೈಸೂರಿನ ಅರಸು ಮನೆತನದೊಂದಿಗೆ ಕೈ ಜೋಡಿಸುತ್ತಾರೆ ಮತ್ತು ಇವರ ಸಹಾಯಕ್ಕೆ ಇಬ್ಬರು ವಲಸಿಗ ಸಹೋದರರು ಬರುತ್ತಾರೆ. ದೇವೀಚಂದ್ರನು 'ರಾಜಾವಳಿ ಕಥಾಸಾರ'ದಲ್ಲಿ ಉಲ್ಲೇಖಿಸಿರುವಂತೆ, ದೊರೆ ಮಾರನಾಯಕನು ಪ್ರಬಲನಾಗಿದ್ದರಿಂದ ಆತನನ್ನು ನೇರವಾಗಿ ಎದುರಿಸಲಾಗದೆ, 'ಚಾಮಾಯಿ' ಎಂಬ ಇದೇ ನಾಯಕ ಸಮುದಾಯಕ್ಕೆ ಸೇರಿದ ಯುವತಿಯೋರ್ವಳ ಸಹಾಯದೊಂದಿಗೆ ಮಾರನಾಯಕನನ್ನು ಕುತಂತ್ರದಿಂದ ಸಂಹರಿಸಲಾಗುತ್ತದೆ. ಈ ಕಾರ್ಯದಲ್ಲಿ ಚಾಮಾಯಿಯು ಸಾವನ್ನಪ್ಪುತ್ತಾಳೆ. ನಂತರ ಮೈಸೂರಿನ ಹಳೆಯ ಅರಸರನ್ನು ಪುನಃ "ಮೈಸೂರು ಮತ್ತು ವಿಶಾಲ ಕಾರುಗಹಳ್ಳಿ" ಸಂಸ್ಥಾನಗಳ ಅರಸರನ್ನಾಗಿ ಪಟ್ಟಕಟ್ಟಲಾಗುತ್ತದೆ. ಚಾಮಾಯಿಯು 'ವ್ಯಂತರ ದೇವತೆ'ಯಾಗಿ ಕಾಣಿಸಿಕೊಳ್ಳುತ್ತಾಳೆ. ನಂತರ ಅವಳಿಗೆ ಗುಡಿ ಕಟ್ಟಿ ಪೂಜಿಸಲಾಗುತ್ತದೆ. ವಿಜಯನಗರ ಪತನಾನಂತರ ಮೈಸೂರು ಪ್ರಬಲಗೊಂಡಂತೆ, ವೈದಿಕರು ಇಲ್ಲಿಗೆ ವಲಸೆ ಬಂದು ನಿಲ್ಲುತ್ತಾರೆ. ಅವರ ಕೈಯಲ್ಲಿ ಮೂಲತಃ ಶೈವರಾದ ಮೈಸೂರು ಒಡೆಯರ್'ಗಳು ತಮ್ಮ ವಂಶದ ಮೂಲವನ್ನು ಪೌರಾಣಿಕ ವಂಶದೊಂದಿಗೆ ಸಮೀಕರಿಸುವ ಪ್ರಯತ್ನ ಮಾಡುತ್ತಾರೆ. ಮತ್ತು ಇಲ್ಲಿನ "ಮೂಲ ನಿವಾಸಿ ಸಮುದಾಯವಾದ ನಾಯಕರ ಇತಿಹಾಸವನ್ನು ಮರೆಮಾಚುವ ಸಲುವಾಗಿ" ಮಾರನಾಯಕನನ್ನು ಮೋಸದಿಂದ ಸಂಹರಿಸಿದ ಕಥೆಯನ್ನು 'ಚಾಮುಂಡಿ-ಮಹಿಷಾಸುರ' ಕಥೆಯನ್ನಾಗಿ ಪ್ರಚಾರ ಮಾಡತೊಡಗುತ್ತಾರೆ. ಆ ಮೂಲಕ ಆಡಳಿತಾತ್ಮಕ ಅಸ್ತಿತ್ವವನ್ನು ಉಳಿಸಿಕೊಳ್ಳುವ ಜೊತೆಗೆ, ಸಾಮಾಜಿಕ ಮತ್ತು ಧಾರ್ಮಿಕ ಹಿಡಿತ ಸಾಧಿಸುವ ಮೂಲಕ ಇಲ್ಲಿನ ಜನಮಾನಸದಲ್ಲಿ ಮತ್ತಷ್ಟು ಗಟ್ಟಿಯಾಗಿ ಬೇರೂರುವ ಪ್ರಯತ್ನ ಮಾಡುತ್ತಾರೆ ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಇಲ್ಲಿ ಮಾರನಾಯಕನನ್ನು 'ಮಹಿಷಾಸುರ' ಎನ್ನಲು ಆತನು 'ಮಹಿಷ' ಕುಲಕ್ಕೆ ಸೇರಿದವನು ಎಂಬುದೇ ಕಾರಣವಾಗಿದೆ. ವಾಸ್ತವವಾಗಿ ಪುರಾಣಗಳನ್ನು ಗಮನಿಸುವುದೇ ಆದರೆ 'ಚಾಮುಂಡಿಗೂ ಮತ್ತು ಮಹಿಷಾಸುರನಿಗೂ' ಸಂಬಂಧವೇ ಇಲ್ಲ. ಚಾಮುಂಡಿಯು ತನ್ನ ಹೆಸರನ್ನು ಪಡೆದುಕೊಂಡದ್ದು 'ಚಂಡ-ಮುಂಡ' ಎಂಬ ರಾಕ್ಷಸರನ್ನು ಸಂಹರಿಸಿ. 'ಮಹಿಷಾಸುರ'ನನ್ನು ಸಂಹರಿಸಿದ್ದು 'ಮಹಿಷಾಸುರ ಮರ್ಧಿನಿ' ಎಂಬ ದೇವತೆ. ಈ ಇಬ್ಬರೂ ಬೇರೆಬೇರೆ ಸನ್ನಿವೇಶಗಳಲ್ಲಿ ಬರುವ ಬೇರೆಬೇರೆ ಪಾತ್ರಗಳು. ಮತ್ತು ಈ ಎರಡೂ ಪಾತ್ರಗಳು ಉತ್ತರ ಭಾರತದಲ್ಲಿ ಕಂಡುಬರುವಂಥದ್ದಾಗಿವೆ. ಒಂದನ್ನು ಗಮನಿಸಿ. ಚಾಮುಂಡೇಶ್ವರಿಯ ವಾಹನವು ಸಿಂಹವಾಗಿದೆ. ಈ ಸಿಂಹವು ಕಂಡುಬರುವುದು ಉತ್ತರ ಭಾರತದಲ್ಲೇ ಹೊರತು, ದಕ್ಷಿಣ ಭಾರತದಲ್ಲಲ್ಲ. ಇದೊಂದೇ ಕಾರಣ ಚಾಮುಂಡೇಶ್ವರಿ ಕಥೆಯು ಒಂದು "ಸಂಚಾರಿ ಐತಿಹ್ಯ" ಎಂಬುವುದನ್ನು ಖಚಿತಪಡಿಸುತ್ತದೆ. ಇವು ದಕ್ಷಿಣ ಭಾರತ ಮೂಲದವಲ್ಲ. ವೈದಿಕರು 'ಚಾಮಾಯಿ' ಎಂಬ ಸ್ಥಳೀಯ ಹೆಸರುಗಳನ್ನು ಮತ್ತು 'ಮಾರನಾಯಕ'ನಂತಹ ಮೂಲನಿವಾಸಿಗಳ ಸಂಹಾರದ ಕಥೆಯನ್ನು ಸಂಸ್ಕೃತೀಕರಣಗೊಳಿಸಿ, ಪೌರಾಣಿಕ ಸ್ಪರ್ಶ ನೀಡುವುದರಲ್ಲಿ ಸಿದ್ಧಹಸ್ತರು. ಭಾರತ ಉಪಖಂಡದಾದ್ಯಂತ ನಾವು ಇಂದು ಕಾಣುವ ಪೌರಾಣಿಕ ಕಥೆಗಳು, ಇದೇ ವೈದಿಕರು ಸಂಸ್ಕೃತೀಕರಣಗೊಳಿಸಿರುವ ಮೂಲನಿವಾಸಿಗಳ ಇತಿಹಾಸವಾಗಿದೆ. ಸದ್ಯ 'ಮಹಿಷಾಸುರ' ಎಂಬ ಪಾತ್ರವು ಮೈಸೂರು ಭಾಗದ ನಾಯಕ ಸಮುದಾಯದ ಪರಂಪರೆಯ ದ್ಯೋತಕವಾಗಿ ಉಳಿದಿದೆ. ಆದರೆ ಇತ್ತೀಚೆಗೆ "ಪ್ರಗತಿಪರ ಸಂಘಟನೆ"ಗಳೆಂದು ಕರೆದುಕೊಂಡ ಕೆಲವರು ಮಹಿಷಾಸುರನನ್ನು "ಬೌದ್ಧ ಭಿಕ್ಷು" ಎಂದು ಬಿಂಬಿಸಲು ಹೊರಟಿರುವುದು ಹಳೇ ಮೈಸೂರು ಭಾಗದಲ್ಲಿ ನಾಯಕ ಸಮುದಾಯದ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ. ಮತ್ತು ಮಾರನಾಯಕರ ಇತಿಹಾಸವನ್ನು ಅಪಹರಿಸುವ ಅಥವಾ ಮರೆಮಾಚುವ ತಂತ್ರವಾಗಿದೆ. ಮಹಿಷಾಸುರನನ್ನು ಅಶೋಕ ಚಕ್ರವರ್ತಿ ಧರ್ಮ ಪ್ರಚಾರಕ್ಕಾಗಿ ಕಳಿಸಿದ ಬೌದ್ಧ ಬಿಕ್ಷು ಎಂದು ಹೇಳುವುದಕ್ಕೆ ಹಲವಾರು ಮೂಲಭೂತ ತೊಡಕುಗಳು ಎದುರಾಗುವುದು ಓರ್ವ ಸಾಮಾನ್ಯನ ಅರಿವಿಗೂ ಬರುವಂತಹದ್ದಾಗಿದೆ. ಮೊದಲಿಗೆ ಬೌದ್ಧ ಬಿಕ್ಷುಗಳು ಲೌಕಿಕ ಜಗತ್ತನ್ನು ಪರಿತ್ಯಜಿಸಿದವರು. ಕಾವಿ ವಸ್ತ್ರದಾರಿಗಳಾದ ಅವರ ಬಳಿ ಭಿಕ್ಷಾಪಾತ್ರೆ ಹೊರತುಪಡಿಸಿ ಬೇರೇನು ಇರುವುದಿಲ್ಲ. ಅವರು ಜಂಗಮರು, ಒಂದು ಸ್ಥಳದಲ್ಲಿ ನಿಲ್ಲುವಂತಿಲ್ಲ. ನಿರಂತರ ಸಂಚಾರದ ಮೂಲಕ ಬೌದ್ಧ ಧರ್ಮ ಪ್ರಚಾರವಷ್ಟೇ ಅವರ ಕೆಲಸ. ಅದೂ ಅಲ್ಲದೇ ಈ ಪ್ರಗತಿಪರರು ಮಹಿಷಾಸುರನೆಂದು ಹೇಳುತ್ತಿರುವ "ತೇರಮಹಾದೇವ"ನೆಂಬ ಬೌದ್ಧ ಭಿಕ್ಷು ಸ್ವತಃ ಅಶೋಕ ಚಕ್ರವರ್ತಿ ಕಳಿಸಿರುವ ಧೂತ. ಆತನನ್ನು ಸಂಹರಿಸಿದ್ದೇ ಆದಲ್ಲಿ, ಚಕ್ರವರ್ತಿಯೇನು ಸುಮ್ಮನೆ ಇರುತ್ತಿದ್ದನೇ ?!!! ಅಕಸ್ಮಾತ್ ಬೌದ್ಧ ಭಿಕ್ಷು ಬಂದು ಮೈಸೂರಿನಲ್ಲಿ ರಾಜ್ಯ ಸ್ಥಾಪನೆ ಮಾಡಿದ ಎಂದಾದರೆ, ಆತನೂ ವಲಸಿಗನಾಗಲಿಲ್ಲವೇ ?!!! ಮತ್ತು ಆತ ಇಲ್ಲಿ ರಾಜ್ಯ ಸ್ಥಾಪಿಸುವಾಗ ಸ್ಥಳೀಯವಾಗಿ ಆಡಳಿತ ನೋಡಿಕೊಳ್ಳಲು ಮತ್ತು ಜನರಕ್ಷಣೆಗಾಗಿ ಯಾರೂ ಅರಸರು ಇರಲಿಲ್ಲವೇ ???!!! ಈ ಅರಸರು ತನ್ನ ರಾಜ್ಯ ಅಪಹರಿಸಿದ ಕರ್ತವ್ಯ ವಂಚಿತ ಬೌದ್ಧ ಭಿಕ್ಷುವಿನ ವಿರುದ್ಧ ಚಕ್ರವರ್ತಿಯ ಬಳಿ ದೂರಲಿಲ್ಲವೇ ?!!! ಈ "ಮಹಿಷಾಸುರ"ನನ್ನು ವೈದಿಕರು ಸಂಹರಿಸಿದ ನಂತರ, " ಮಹಿಷಾಸುರ " ಎಂಬ ಹೆಸರಿನಿಂದಲೇ ಕರೆಯಲು ಕಾರಣವಾದರೂ ಏನು ???!!! ಕರ್ನಾಟಕದ ಕರಾವಳಿಯಲ್ಲಿ ಮತ್ತು ಉತ್ತರ ಭಾರತದಲ್ಲಿ ಇರುವಂತೆ ಮೈಸೂರು ಭಾಗದಲ್ಲಿ ವಿಶಿಷ್ಟ ಎನಿಸುವ " ಎಮ್ಮೆ"ಯ ತಳಿಗಳು ಏನಿಲ್ಲ. ಎಲ್ಲಾ ಕಡೆಯೂ ಇರುವಂತೆ ಇಲ್ಲಿಯೂ ಎಮ್ಮೆಗಳಿವೆಯಷ್ಟೆ. ಅಲ್ಲದೇ "ಮಹಿಷ/ಎಮ್ಮೆ" ಎಂಬ ಪದವು ಸ್ತ್ರೀಲಿಂಗ ಸೂಚಕವಾಗಿದೆ. ಆದರೆ ಪುರುಷ ಬೌದ್ಧಬಿಕ್ಷುವಿಗೆ ಸ್ತ್ರೀಲಿಂಗ ಸೂಚಕ ಹೆಸರಿನಿಂದ ಕರೆದದ್ದಾದರೂ ಏತಕ್ಕೆ ???!!! "ಕೋಣಾಸುರ" ಎನ್ನಬಹುದಿತ್ತಲ್ಲವೇ ???!!! ಹಾಗೆ ನೋಡಿದರೆ ಮೈಸೂರು ಪ್ರದೇಶವು ಹುಲಿ ಮತ್ತು ಆನೆಗಳಿಗೆ ಪ್ರಸಿದ್ಧಿಯಾಗಿದೆ. ಹಾಗಾಗಿ ಆ ಬೌದ್ಧ ಭಿಕ್ಷುವನ್ನು "ಮಹಿಷಾಸುರ" ಎನ್ನುವ ಬದಲಿಗೆ "ವ್ಯಾಘ್ರಾಸುರ" ಎಂತಲೋ ಅಥವಾ " ಗಜಾಸುರ" ಎಂತಲೋ ಕರೆಯಬಹುದಿತ್ತಲ್ಲವೇ ? ಮಹಿಷಾಸುರನನ್ನು ಬೌದ್ಧ ಭಿಕ್ಷು ಎನ್ನುವವರು ಕನಿಷ್ಠ ತಿಳುವಳಿಕೆಯೂ ಇಲ್ಲದ ಅಪ್ರಬುದ್ಧರು ಎಂದು ಈ ಮೇಲ್ಕಂಡ ಅಂಶಗಳಿಂದ ಸ್ಪಷ್ಟವಾಗಲಿಲ್ಲವೇ ಬಂಧುಗಳೇ ? ಈ ಮತಿಗೇಡಿಗಳು ಸುಮ್ಮನೆ ಪ್ರಚಾರ ಗಿಟ್ಟಿಸಿಕೊಳ್ಳಲು ಮತ್ತು ಇನ್ನೊಂದು ವರ್ಗದವರ ವಿರುದ್ಧ ಹಗೆತನ ಸಾಧಿಸಲು ಮಹಿಷಾಸುರನನ್ನು ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ. ಇದಕ್ಕೆ ಮಹಿಷಾಸುರ (ಮಾರನಾಯಕ)ನ ವಿಚಾರದಲ್ಲಿ ನಮ್ಮ ಸಮುದಾಯದ ಹಿರಿಯರು/ತಿಳುವಳಿಕೆಯುಳ್ಳವರು/ಮುಖಂಡರು/ವಿದ್ಯಾವಂತರು ಇಷ್ಟು ದಿನ ಮೌನವಾಗಿದ್ದೇ ಕಾರಣವಾಗಿದೆ. ಬಂಧುಗಳೇ ಸದ್ಯ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ, ಇಷ್ಟು ದಿನ ವೈದಿಕರ ತಂತ್ರ-ಕುತಂತ್ರಗಳಿಗೆ ಬಲಿಯಾದ 'ನಾಯಕರು' ಇನ್ನು ಮುಂದೆ ಈ So called ಪ್ರಗತಿಪರರ ಕುತಂತ್ರಗಳಿಗೆ ಬಲಿಯಾಗಬೇಕಾಗುತ್ತದೆ. ಹಾಗಾಗಿ ಇನ್ನು ಮುಂದಿನ ದಿನಗಳಲ್ಲಿ ವೈದಿಕರು ಬಿಂಬಿಸಿದ 'ಮಹಿಷಾಸುರ'ನನ್ನು ಅಪ್ಪಿಕೊಳ್ಳದೇ ಇದ್ದರೂ, ಆತ ನಮ್ಮ ಸಮುದಾಯದ ಪ್ರತೀಕ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಮತ್ತು ಮಹಿಷಾಸುರನ ನಿಜ ಮುಖವಾದ ಮಾರನಾಯಕರನ್ನು ಅಪ್ಪಿಕೊಂಡು ನೈಜ ಇತಿಹಾಸವನ್ನು ಪ್ರಚುರಪಡಿಸಬೇಕಿದೆ. ಜೊತೆಗೆ "ಮೈಸೂರು ಆಡಳಿತದ ಮೂಲ ಹಕ್ಕುದಾರರು ನಮ್ಮ ನಾಯಕ ಸಮುದಾಯದವರು" ಎಂಬ ಅಭಿಮಾನವನ್ನು ನಮ್ಮ ಮುಂದಿನ ಪೀಳಿಗೆಯಲ್ಲಿ ಮೂಡಿಸಬೇಕಿದೆ.

ಸೂಚನೆ: ನಮ್ಮಲ್ಲಿ ಹಲವಾರು ಜನ ಚಾಮುಂಡೇಶ್ವರಿಯನ್ನು ಭಯ-ಭಕ್ತಿಗಳಿಂದ ಪೂಜಿಸುವರಿದ್ದು, ಅವರಿಗೆ ಮೇಲ್ಕಂಡ ವಾಸ್ತವವನ್ನು ಒಪ್ಪಿಕೊಳ್ಳುವುದು ಕಷ್ಟವಾಗಬಹುದು. ಆದರೆ ಚಿಂತೆಯಿಲ್ಲ. ನೀವು ಪೂಜಿಸುವುದು ಪೌರಾಣಿಕ ಚಂಡ-ಮುಂಡರನ್ನು ಸಂಹರಿಸಿದ್ದ "ಚಾಮುಂಡಿ"ಯನ್ನು ಮತ್ತು ಕೈ ಮುಗಿಯುವುದು ಸ್ವತಃ ಮಾರನಾಯಕರು ಪೂಜಿಸಿದ "ವಾಸಂತಿಕಾದೇವಿ"ಯ ಮೂರ್ತಿಗೆ ಹೊರತು ಮಾರನಾಯಕರನ್ನು ಸಂಹರಿಸಿದ "ಚಾಮಾಯಿ"ಯನ್ನಲ್ಲ. ಇದೇ ಮಾರನಾಯಕರ ಸೋದರಸಂಬಂಧಿಯಾದ "ಶ್ರವಣ ಚಕ್ರವರ್ತಿ"ಯನ್ನು ಮಲೈ ಮಹದೇಶ್ವರರು ಸಂಹರಿಸಿದರು. ಆದರೂ ನಮಗೆ ಮಲೈ ಮಹದೇಶ್ವರರು ಕುಲ ದೇವರಾಗಿಲ್ಲವೇ ???

ಲೆಖಕರು: ದೀಪಕ್ ಪಾಳೇಗಾರ್ "ಮಹಿಷ" (ಎರುಮೈ/ಎಮ್ಮೆ) ಎಂಬುದು ಹಳೇ ಮೈಸೂರು ಭಾಗದ ಮೂಲ ನಿವಾಸಿಗಳಾದ "ತೊರೆಯರ್ ನಾಯಕ" ಜನಾಂಗದ ಪ್ರಮುಖ ಉಪ-ಪಂಗಡ. ಈ ಸಮುದಾಯದಲ್ಲಿ ಹಲವಾರು ಉಪಪಂಗಡಗಳಿದ್ದು, 'ಮಹಿಷ' ಕುಲವು ಪ್ರಮುಖವಾಗಿದೆ. ಈ ಮಹಿಷ ಕುಲದ ಅರಸರು ಮೈಸೂರು ಭಾಗವನ್ನು ಪ್ರಾಚೀನ ಕಾಲದಿಂದಲೂ ಆಳ್ವಿಕೆ ಮಾಡಿಕೊಂಡು ಬಂದಿರುವರು. ಪಶ್ಚಿಮ ಬಂಗಾಳ ರಾಜ್ಯದಲ್ಲಿಯೂ ಈ ತೊರೆಯರ್ ಸಮುದಾಯವಿದ್ದು "ನಿಷಾದ ಕುಲ"ದ (ಬೇಡರು) ಪ್ರಮುಖ ಉಪಪಂಗಡವಾಗಿದೆ. ಅಲ್ಲಿಯೂ "ಮಹಿಷ" ಎಂಬುದು ಈ ಸಮುದಾಯದ ಪರ್ಯಾಯ ಪದವಾಗಿದೆ. ಇದೇ "ಮಹಿಷ" ಕುಲವು ಕರ್ನಾಟಕದ ಬೇಡರಲ್ಲಿಯೂ ಇದ್ದು, ಅಲ್ಲಿ "ಎನುಮಲೋರು" ಎಂದಾಗುತ್ತದೆ. ತೊರೆಯರ್ ಸಮುದಾಯದ ಪ್ರಾಚೀನ ಉಲ್ಲೇಖವು ತಮಿಳಿನ ಸಂಘಂ ಸಾಹಿತ್ಯದಲ್ಲಿ ಇದ್ದು, ಅಲ್ಲಿ ಇವರನ್ನು "ತಮಿಳುನಾಡಿನ ಮೇಲೆ ದಾಳಿ ಮಾಡಿದ ಎರುಮೈನಾಡು/ಮೈಸೂರಿನ ಮುತ್ತೊರೆಯರ್" ಎಂದು ಮತ್ತು "ಚೋಳ ರಾಜನೆತನದ ಸಂಸ್ಥಾಪಕರಾದ ಇವರು ಮೂಲತಃ ಬಂಗಾಳದ ನಾಗವಂಶದ ಒಂದು ಶಾಖೆ" ಎಂಬುದಾಗಿ ಉಲ್ಲೇಖಿಸಲಾಗಿದೆ ಎಂದು ವಿ.ಕನಕಸಭಾಯ್ ಅವರು ತಮ್ಮ "The Tamils Eighteen Hundred Years Ago, 1904" ಕೃತಿಯಲ್ಲಿ ತಿಳಿಸಿದ್ದಾರೆ. ಮೈಸೂರು ನಾಯಕ ಸಮುದಾಯದ ಬಗ್ಗೆ ದೇವಿಚಂದ್ರನು ತನ್ನ 'ರಾಜಾವಳಿ ಕಥಾಸಾರ'ದಲ್ಲಿ ಉಲ್ಲೇಖಿಸಿದ್ದು, ಮೈಸೂರು-ಹಾಸನ-ಚಾ.ನಗರ ಭಾಗಗಳಲ್ಲಿ ಇವರು ಮೂರು ರಾಜ್ಯಗಳನ್ನು ನಿರ್ಮಿಸಿದರು ಎಂದು ತಿಳಿಸುತ್ತಾನೆ. ನಂತರ ಹೊಯ್ಸಳ-ವಿಜಯನಗರ ಕಾಲದಲ್ಲಿ ಈ ಸಮುದಾಯದ ಅರಸರು ಮೈಸೂರು ಭಾಗದ ಒಟ್ಟು ಹದಿನಾರು ಪ್ರಾಂತ್ಯಗಳನ್ನು (ಎಲ್ಲಾ ಶಾಸನಗಳಲ್ಲೂ 'ತೊರೆಯನಾಡು' ಎಂದೇ ಉಲ್ಲೇಖಿಸಿರುವುದು ಗಮನಾರ್ಹ) ಆಳ್ವಿಕೆ ಮಾಡಿದ್ದು, ಇಂದಿನ 'ಯಳಂದೂರು' ಪಟ್ಟಣ ಇವುಗಳ ಕೇಂದ್ರವಾಗಿತ್ತು. ಇವರೆಲ್ಲರೂ ಮೂಲತಃ 'ತಲಕಾಡು ಗಂಗ'ರ ಸಂಬಂಧಿಗಳಾಗಿದ್ದು, ಜೈನ ಧರ್ಮದ ಪ್ರಭಾವದಲ್ಲಿದ್ದವರಾಗಿದ್ದರು. ಈ ಹದಿನಾರು ಪ್ರಾಂತ್ಯಗಳಲ್ಲಿ ಒಂದು 'ಕಾರುಗಹಳ್ಳಿ ಸಂಸ್ಥಾನ'. ಈ ಕಾರುಗಹಳ್ಳಿ ಸಂಸ್ಥಾನವು ಚಾಮುಂಡಿ ಬೆಟ್ಟಕ್ಕೆ ಹೊಂದಿಕೊಂಡಂತೆ ಪೂರ್ವ ದಿಕ್ಕಿಗೆ ಇತ್ತು (ಮೈಸೂರು ಚಾಮುಂಡಿ ಬೆಟ್ಟದ ಪಶ್ಚಿಮ ದಿಕ್ಕಿಗೆ ಹೊಂದಿಕೊಂಡಂತೆ ಇರುವ ಪಟ್ಟಣ). ಕಾರುಗಹಳ್ಳಿಯ ದೊರೆಗಳು ಮಹಾಬಲೇಶ್ವರನ ಪರಮ ಭಕ್ತರಾಗಿದ್ದು, ಮಹಾಬಲಾದ್ರಿ (ಇಂದಿನ ಚಾಮುಂಡಿ ಬೆಟ್ಟ) ಯಲ್ಲಿ "ಮಹಾಬಲೇಶ್ವರ ಮತ್ತು ವಾಸಂತಿಕಾದೇವಿ" ಎಂಬ ಜೈನ ಯಕ್ಷಿಣಿ ದೇವತೆಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರು. ನಂತರದಲ್ಲಿ ಇವರು 33 ಹಳ್ಳಿಗಳ ಪಾಳೆಯಪಟ್ಟಾಗಿದ್ದ ಮೈಸೂರನ್ನು ವಶಪಡಿಸಿಕೊಳ್ಳುತ್ತಾರೆ. ಈ ಮನೆತನದ ಕೊನೆಯ ದೊರೆ "ಮಾರನಾಯಕ". ಈತನು ವಶಪಡಿಸಿಕೊಂಡ ಮೈಸೂರಿನಲ್ಲಿ ಕೆಲವು ಸಾಮಾಜಿಕ-ಧಾರ್ಮಿಕ ಸುಧಾರಣೆಗಳನ್ನು ತರಲು ಪ್ರಾರಂಭಿಸುತ್ತಾನೆ. ಅವುಗಳಲ್ಲಿ ಮುಖ್ಯವಾದವು, 1) ಪ್ರತಿಯೊಂದು ಗ್ರಾಮಗಳ ಮಧ್ಯದಲ್ಲಿ " ಮಾರಿ" ದೇವತೆಗಳ ಸ್ಥಾಪನೆ 2) ಈ ದೇವಾಲಯಗಳಿಗೆ ದಲಿತ ಎಡಗೈ ಮತ್ತು ಬಲಗೈ ಸಮುದಾಯಗಳ ಪ್ರವೇಶ ಮತ್ತು 3) ಪ್ರಮುಖವಾಗಿ ಮೈಸೂರು ಭಾಗದಲ್ಲಿ ಅಲ್ಲಿಯವರೆಗೂ ಆಚರಣೆಯಲ್ಲಿದ್ದ "ನರಬಲಿ" ರದ್ಧತಿ. ಈ ಸುಧಾರಣೆಗಳಿಂದಾಗಿ ತಮ್ಮಗಳ ಸ್ವಹಿತಾಸಕ್ತಿಗೆ ಧಕ್ಕೆ ಉಂಟಾಗಿದ್ದರಿಂದ ಮೈಸೂರಿನ ಮೇಲ್ವರ್ಗಗಳ ಜನರು ನೂತನ ಆಡಳಿತದ ವಿರೋಧಿಗಳಾಗುತ್ತಾರೆ. ಈ ಮೇಲ್ವರ್ಗದ ಜನರು ಅದಾಗಲೇ ಸಂಸ್ಥಾನ ಕಳೆದುಕೊಂಡು, ಅಸಮಾಧಾನಗೊಂಡಿದ್ದ ಮೈಸೂರಿನ ಅರಸು ಮನೆತನದೊಂದಿಗೆ ಕೈ ಜೋಡಿಸುತ್ತಾರೆ ಮತ್ತು ಇವರ ಸಹಾಯಕ್ಕೆ ಇಬ್ಬರು ವಲಸಿಗ ಸಹೋದರರು ಬರುತ್ತಾರೆ. ದೇವೀಚಂದ್ರನು 'ರಾಜಾವಳಿ ಕಥಾಸಾರ'ದಲ್ಲಿ ಉಲ್ಲೇಖಿಸಿರುವಂತೆ, ದೊರೆ ಮಾರನಾಯಕನು ಪ್ರಬಲನಾಗಿದ್ದರಿಂದ ಆತನನ್ನು ನೇರವಾಗಿ ಎದುರಿಸಲಾಗದೆ, 'ಚಾಮಾಯಿ' ಎಂಬ ಇದೇ ನಾಯಕ ಸಮುದಾಯಕ್ಕೆ ಸೇರಿದ ಯುವತಿಯೋರ್ವಳ ಸಹಾಯದೊಂದಿಗೆ ಮಾರನಾಯಕನನ್ನು ಕುತಂತ್ರದಿಂದ ಸಂಹರಿಸಲಾಗುತ್ತದೆ. ಈ ಕಾರ್ಯದಲ್ಲಿ ಚಾಮಾಯಿಯು ಸಾವನ್ನಪ್ಪುತ್ತಾಳೆ. ನಂತರ ಮೈಸೂರಿನ ಹಳೆಯ ಅರಸರನ್ನು ಪುನಃ "ಮೈಸೂರು ಮತ್ತು ವಿಶಾಲ ಕಾರುಗಹಳ್ಳಿ" ಸಂಸ್ಥಾನಗಳ ಅರಸರನ್ನಾಗಿ ಪಟ್ಟಕಟ್ಟಲಾಗುತ್ತದೆ. ಚಾಮಾಯಿಯು 'ವ್ಯಂತರ ದೇವತೆ'ಯಾಗಿ ಕಾಣಿಸಿಕೊಳ್ಳುತ್ತಾಳೆ. ನಂತರ ಅವಳಿಗೆ ಗುಡಿ ಕಟ್ಟಿ ಪೂಜಿಸಲಾಗುತ್ತದೆ. ವಿಜಯನಗರ ಪತನಾನಂತರ ಮೈಸೂರು ಪ್ರಬಲಗೊಂಡಂತೆ, ವೈದಿಕರು ಇಲ್ಲಿಗೆ ವಲಸೆ ಬಂದು ನಿಲ್ಲುತ್ತಾರೆ. ಅವರ ಕೈಯಲ್ಲಿ ಮೂಲತಃ ಶೈವರಾದ ಮೈಸೂರು ಒಡೆಯರ್'ಗಳು ತಮ್ಮ ವಂಶದ ಮೂಲವನ್ನು ಪೌರಾಣಿಕ ವಂಶದೊಂದಿಗೆ ಸಮೀಕರಿಸುವ ಪ್ರಯತ್ನ ಮಾಡುತ್ತಾರೆ. ಮತ್ತು ಇಲ್ಲಿನ "ಮೂಲ ನಿವಾಸಿ ಸಮುದಾಯವಾದ ನಾಯಕರ ಇತಿಹಾಸವನ್ನು ಮರೆಮಾಚುವ ಸಲುವಾಗಿ" ಮಾರನಾಯಕನನ್ನು ಮೋಸದಿಂದ ಸಂಹರಿಸಿದ ಕಥೆಯನ್ನು 'ಚಾಮುಂಡಿ-ಮಹಿಷಾಸುರ' ಕಥೆಯನ್ನಾಗಿ ಪ್ರಚಾರ ಮಾಡತೊಡಗುತ್ತಾರೆ. ಆ ಮೂಲಕ ಆಡಳಿತಾತ್ಮಕ ಅಸ್ತಿತ್ವವನ್ನು ಉಳಿಸಿಕೊಳ್ಳುವ ಜೊತೆಗೆ, ಸಾಮಾಜಿಕ ಮತ್ತು ಧಾರ್ಮಿಕ ಹಿಡಿತ ಸಾಧಿಸುವ ಮೂಲಕ ಇಲ್ಲಿನ ಜನಮಾನಸದಲ್ಲಿ ಮತ್ತಷ್ಟು ಗಟ್ಟಿಯಾಗಿ ಬೇರೂರುವ ಪ್ರಯತ್ನ ಮಾಡುತ್ತಾರೆ ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಇಲ್ಲಿ ಮಾರನಾಯಕನನ್ನು 'ಮಹಿಷಾಸುರ' ಎನ್ನಲು ಆತನು 'ಮಹಿಷ' ಕುಲಕ್ಕೆ ಸೇರಿದವನು ಎಂಬುದೇ ಕಾರಣವಾಗಿದೆ. ವಾಸ್ತವವಾಗಿ ಪುರಾಣಗಳನ್ನು ಗಮನಿಸುವುದೇ ಆದರೆ 'ಚಾಮುಂಡಿಗೂ ಮತ್ತು ಮಹಿಷಾಸುರನಿಗೂ' ಸಂಬಂಧವೇ ಇಲ್ಲ. ಚಾಮುಂಡಿಯು ತನ್ನ ಹೆಸರನ್ನು ಪಡೆದುಕೊಂಡದ್ದು 'ಚಂಡ-ಮುಂಡ' ಎಂಬ ರಾಕ್ಷಸರನ್ನು ಸಂಹರಿಸಿ. 'ಮಹಿಷಾಸುರ'ನನ್ನು ಸಂಹರಿಸಿದ್ದು 'ಮಹಿಷಾಸುರ ಮರ್ಧಿನಿ' ಎಂಬ ದೇವತೆ. ಈ ಇಬ್ಬರೂ ಬೇರೆಬೇರೆ ಸನ್ನಿವೇಶಗಳಲ್ಲಿ ಬರುವ ಬೇರೆಬೇರೆ ಪಾತ್ರಗಳು. ಮತ್ತು ಈ ಎರಡೂ ಪಾತ್ರಗಳು ಉತ್ತರ ಭಾರತದಲ್ಲಿ ಕಂಡುಬರುವಂಥದ್ದಾಗಿವೆ. ಒಂದನ್ನು ಗಮನಿಸಿ. ಚಾಮುಂಡೇಶ್ವರಿಯ ವಾಹನವು ಸಿಂಹವಾಗಿದೆ. ಈ ಸಿಂಹವು ಕಂಡುಬರುವುದು ಉತ್ತರ ಭಾರತದಲ್ಲೇ ಹೊರತು, ದಕ್ಷಿಣ ಭಾರತದಲ್ಲಲ್ಲ. ಇದೊಂದೇ ಕಾರಣ ಚಾಮುಂಡೇಶ್ವರಿ ಕಥೆಯು ಒಂದು "ಸಂಚಾರಿ ಐತಿಹ್ಯ" ಎಂಬುವುದನ್ನು ಖಚಿತಪಡಿಸುತ್ತದೆ. ಇವು ದಕ್ಷಿಣ ಭಾರತ ಮೂಲದವಲ್ಲ. ವೈದಿಕರು 'ಚಾಮಾಯಿ' ಎಂಬ ಸ್ಥಳೀಯ ಹೆಸರುಗಳನ್ನು ಮತ್ತು 'ಮಾರನಾಯಕ'ನಂತಹ ಮೂಲನಿವಾಸಿಗಳ ಸಂಹಾರದ ಕಥೆಯನ್ನು ಸಂಸ್ಕೃತೀಕರಣಗೊಳಿಸಿ, ಪೌರಾಣಿಕ ಸ್ಪರ್ಶ ನೀಡುವುದರಲ್ಲಿ ಸಿದ್ಧಹಸ್ತರು. ಭಾರತ ಉಪಖಂಡದಾದ್ಯಂತ ನಾವು ಇಂದು ಕಾಣುವ ಪೌರಾಣಿಕ ಕಥೆಗಳು, ಇದೇ ವೈದಿಕರು ಸಂಸ್ಕೃತೀಕರಣಗೊಳಿಸಿರುವ ಮೂಲನಿವಾಸಿಗಳ ಇತಿಹಾಸವಾಗಿದೆ. ಸದ್ಯ 'ಮಹಿಷಾಸುರ' ಎಂಬ ಪಾತ್ರವು ಮೈಸೂರು ಭಾಗದ ನಾಯಕ ಸಮುದಾಯದ ಪರಂಪರೆಯ ದ್ಯೋತಕವಾಗಿ ಉಳಿದಿದೆ. ಆದರೆ ಇತ್ತೀಚೆಗೆ "ಪ್ರಗತಿಪರ ಸಂಘಟನೆ"ಗಳೆಂದು ಕರೆದುಕೊಂಡ ಕೆಲವರು ಮಹಿಷಾಸುರನನ್ನು "ಬೌದ್ಧ ಭಿಕ್ಷು" ಎಂದು ಬಿಂಬಿಸಲು ಹೊರಟಿರುವುದು ಹಳೇ ಮೈಸೂರು ಭಾಗದಲ್ಲಿ ನಾಯಕ ಸಮುದಾಯದ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ. ಮತ್ತು ಮಾರನಾಯಕರ ಇತಿಹಾಸವನ್ನು ಅಪಹರಿಸುವ ಅಥವಾ ಮರೆಮಾಚುವ ತಂತ್ರವಾಗಿದೆ. ಮಹಿಷಾಸುರನನ್ನು ಅಶೋಕ ಚಕ್ರವರ್ತಿ ಧರ್ಮ ಪ್ರಚಾರಕ್ಕಾಗಿ ಕಳಿಸಿದ ಬೌದ್ಧ ಬಿಕ್ಷು ಎಂದು ಹೇಳುವುದಕ್ಕೆ ಹಲವಾರು ಮೂಲಭೂತ ತೊಡಕುಗಳು ಎದುರಾಗುವುದು ಓರ್ವ ಸಾಮಾನ್ಯನ ಅರಿವಿಗೂ ಬರುವಂತಹದ್ದಾಗಿದೆ. ಮೊದಲಿಗೆ ಬೌದ್ಧ ಬಿಕ್ಷುಗಳು ಲೌಕಿಕ ಜಗತ್ತನ್ನು ಪರಿತ್ಯಜಿಸಿದವರು. ಕಾವಿ ವಸ್ತ್ರದಾರಿಗಳಾದ ಅವರ ಬಳಿ ಭಿಕ್ಷಾಪಾತ್ರೆ ಹೊರತುಪಡಿಸಿ ಬೇರೇನು ಇರುವುದಿಲ್ಲ. ಅವರು ಜಂಗಮರು, ಒಂದು ಸ್ಥಳದಲ್ಲಿ ನಿಲ್ಲುವಂತಿಲ್ಲ. ನಿರಂತರ ಸಂಚಾರದ ಮೂಲಕ ಬೌದ್ಧ ಧರ್ಮ ಪ್ರಚಾರವಷ್ಟೇ ಅವರ ಕೆಲಸ. ಅದೂ ಅಲ್ಲದೇ ಈ ಪ್ರಗತಿಪರರು ಮಹಿಷಾಸುರನೆಂದು ಹೇಳುತ್ತಿರುವ "ತೇರಮಹಾದೇವ"ನೆಂಬ ಬೌದ್ಧ ಭಿಕ್ಷು ಸ್ವತಃ ಅಶೋಕ ಚಕ್ರವರ್ತಿ ಕಳಿಸಿರುವ ಧೂತ. ಆತನನ್ನು ಸಂಹರಿಸಿದ್ದೇ ಆದಲ್ಲಿ, ಚಕ್ರವರ್ತಿಯೇನು ಸುಮ್ಮನೆ ಇರುತ್ತಿದ್ದನೇ ?!!! ಅಕಸ್ಮಾತ್ ಬೌದ್ಧ ಭಿಕ್ಷು ಬಂದು ಮೈಸೂರಿನಲ್ಲಿ ರಾಜ್ಯ ಸ್ಥಾಪನೆ ಮಾಡಿದ ಎಂದಾದರೆ, ಆತನೂ ವಲಸಿಗನಾಗಲಿಲ್ಲವೇ ?!!! ಮತ್ತು ಆತ ಇಲ್ಲಿ ರಾಜ್ಯ ಸ್ಥಾಪಿಸುವಾಗ ಸ್ಥಳೀಯವಾಗಿ ಆಡಳಿತ ನೋಡಿಕೊಳ್ಳಲು ಮತ್ತು ಜನರಕ್ಷಣೆಗಾಗಿ ಯಾರೂ ಅರಸರು ಇರಲಿಲ್ಲವೇ ???!!! ಈ ಅರಸರು ತನ್ನ ರಾಜ್ಯ ಅಪಹರಿಸಿದ ಕರ್ತವ್ಯ ವಂಚಿತ ಬೌದ್ಧ ಭಿಕ್ಷುವಿನ ವಿರುದ್ಧ ಚಕ್ರವರ್ತಿಯ ಬಳಿ ದೂರಲಿಲ್ಲವೇ ?!!! ಈ "ಮಹಿಷಾಸುರ"ನನ್ನು ವೈದಿಕರು ಸಂಹರಿಸಿದ ನಂತರ, " ಮಹಿಷಾಸುರ " ಎಂಬ ಹೆಸರಿನಿಂದಲೇ ಕರೆಯಲು ಕಾರಣವಾದರೂ ಏನು ???!!! ಕರ್ನಾಟಕದ ಕರಾವಳಿಯಲ್ಲಿ ಮತ್ತು ಉತ್ತರ ಭಾರತದಲ್ಲಿ ಇರುವಂತೆ ಮೈಸೂರು ಭಾಗದಲ್ಲಿ ವಿಶಿಷ್ಟ ಎನಿಸುವ " ಎಮ್ಮೆ"ಯ ತಳಿಗಳು ಏನಿಲ್ಲ. ಎಲ್ಲಾ ಕಡೆಯೂ ಇರುವಂತೆ ಇಲ್ಲಿಯೂ ಎಮ್ಮೆಗಳಿವೆಯಷ್ಟೆ. ಅಲ್ಲದೇ "ಮಹಿಷ/ಎಮ್ಮೆ" ಎಂಬ ಪದವು ಸ್ತ್ರೀಲಿಂಗ ಸೂಚಕವಾಗಿದೆ. ಆದರೆ ಪುರುಷ ಬೌದ್ಧಬಿಕ್ಷುವಿಗೆ ಸ್ತ್ರೀಲಿಂಗ ಸೂಚಕ ಹೆಸರಿನಿಂದ ಕರೆದದ್ದಾದರೂ ಏತಕ್ಕೆ ???!!! "ಕೋಣಾಸುರ" ಎನ್ನಬಹುದಿತ್ತಲ್ಲವೇ ???!!! ಹಾಗೆ ನೋಡಿದರೆ ಮೈಸೂರು ಪ್ರದೇಶವು ಹುಲಿ ಮತ್ತು ಆನೆಗಳಿಗೆ ಪ್ರಸಿದ್ಧಿಯಾಗಿದೆ. ಹಾಗಾಗಿ ಆ ಬೌದ್ಧ ಭಿಕ್ಷುವನ್ನು "ಮಹಿಷಾಸುರ" ಎನ್ನುವ ಬದಲಿಗೆ "ವ್ಯಾಘ್ರಾಸುರ" ಎಂತಲೋ ಅಥವಾ " ಗಜಾಸುರ" ಎಂತಲೋ ಕರೆಯಬಹುದಿತ್ತಲ್ಲವೇ ? ಮಹಿಷಾಸುರನನ್ನು ಬೌದ್ಧ ಭಿಕ್ಷು ಎನ್ನುವವರು ಕನಿಷ್ಠ ತಿಳುವಳಿಕೆಯೂ ಇಲ್ಲದ ಅಪ್ರಬುದ್ಧರು ಎಂದು ಈ ಮೇಲ್ಕಂಡ ಅಂಶಗಳಿಂದ ಸ್ಪಷ್ಟವಾಗಲಿಲ್ಲವೇ ಬಂಧುಗಳೇ ? ಈ ಮತಿಗೇಡಿಗಳು ಸುಮ್ಮನೆ ಪ್ರಚಾರ ಗಿಟ್ಟಿಸಿಕೊಳ್ಳಲು ಮತ್ತು ಇನ್ನೊಂದು ವರ್ಗದವರ ವಿರುದ್ಧ ಹಗೆತನ ಸಾಧಿಸಲು ಮಹಿಷಾಸುರನನ್ನು ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ. ಇದಕ್ಕೆ ಮಹಿಷಾಸುರ (ಮಾರನಾಯಕ)ನ ವಿಚಾರದಲ್ಲಿ ನಮ್ಮ ಸಮುದಾಯದ ಹಿರಿಯರು/ತಿಳುವಳಿಕೆಯುಳ್ಳವರು/ಮುಖಂಡರು/ವಿದ್ಯಾವಂತರು ಇಷ್ಟು ದಿನ ಮೌನವಾಗಿದ್ದೇ ಕಾರಣವಾಗಿದೆ. ಬಂಧುಗಳೇ ಸದ್ಯ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ, ಇಷ್ಟು ದಿನ ವೈದಿಕರ ತಂತ್ರ-ಕುತಂತ್ರಗಳಿಗೆ ಬಲಿಯಾದ 'ನಾಯಕರು' ಇನ್ನು ಮುಂದೆ ಈ So called ಪ್ರಗತಿಪರರ ಕುತಂತ್ರಗಳಿಗೆ ಬಲಿಯಾಗಬೇಕಾಗುತ್ತದೆ. ಹಾಗಾಗಿ ಇನ್ನು ಮುಂದಿನ ದಿನಗಳಲ್ಲಿ ವೈದಿಕರು ಬಿಂಬಿಸಿದ 'ಮಹಿಷಾಸುರ'ನನ್ನು ಅಪ್ಪಿಕೊಳ್ಳದೇ ಇದ್ದರೂ, ಆತ ನಮ್ಮ ಸಮುದಾಯದ ಪ್ರತೀಕ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಮತ್ತು ಮಹಿಷಾಸುರನ ನಿಜ ಮುಖವಾದ ಮಾರನಾಯಕರನ್ನು ಅಪ್ಪಿಕೊಂಡು ನೈಜ ಇತಿಹಾಸವನ್ನು ಪ್ರಚುರಪಡಿಸಬೇಕಿದೆ. ಜೊತೆಗೆ "ಮೈಸೂರು ಆಡಳಿತದ ಮೂಲ ಹಕ್ಕುದಾರರು ನಮ್ಮ ನಾಯಕ ಸಮುದಾಯದವರು" ಎಂಬ ಅಭಿಮಾನವನ್ನು ನಮ್ಮ ಮುಂದಿನ ಪೀಳಿಗೆಯಲ್ಲಿ ಮೂಡಿಸಬೇಕಿದೆ.

ಸೂಚನೆ: ನಮ್ಮಲ್ಲಿ ಹಲವಾರು ಜನ ಚಾಮುಂಡೇಶ್ವರಿಯನ್ನು ಭಯ-ಭಕ್ತಿಗಳಿಂದ ಪೂಜಿಸುವರಿದ್ದು, ಅವರಿಗೆ ಮೇಲ್ಕಂಡ ವಾಸ್ತವವನ್ನು ಒಪ್ಪಿಕೊಳ್ಳುವುದು ಕಷ್ಟವಾಗಬಹುದು. ಆದರೆ ಚಿಂತೆಯಿಲ್ಲ. ನೀವು ಪೂಜಿಸುವುದು ಪೌರಾಣಿಕ ಚಂಡ-ಮುಂಡರನ್ನು ಸಂಹರಿಸಿದ್ದ "ಚಾಮುಂಡಿ"ಯನ್ನು ಮತ್ತು ಕೈ ಮುಗಿಯುವುದು ಸ್ವತಃ ಮಾರನಾಯಕರು ಪೂಜಿಸಿದ "ವಾಸಂತಿಕಾದೇವಿ"ಯ ಮೂರ್ತಿಗೆ ಹೊರತು ಮಾರನಾಯಕರನ್ನು ಸಂಹರಿಸಿದ "ಚಾಮಾಯಿ"ಯನ್ನಲ್ಲ. ಇದೇ ಮಾರನಾಯಕರ ಸೋದರಸಂಬಂಧಿಯಾದ "ಶ್ರವಣ ಚಕ್ರವರ್ತಿ"ಯನ್ನು ಮಲೈ ಮಹದೇಶ್ವರರು ಸಂಹರಿಸಿದರು. ಆದರೂ ನಮಗೆ ಮಲೈ ಮಹದೇಶ್ವರರು ಕುಲ ದೇವರಾಗಿಲ್ಲವೇ ???