ನಮ್ಮ ತುಮಕೂರು ಜಿಲ್ಲೆ.

'ತುಮಕೂರಿನ ಬಗ್ಗೆ ನಿಮಗೆಷ್ಟು ಗೊತ್ತು'?


ತುಮಕೂರು ಬೆಂಗಳೂರಿನಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿದೆ ಅಷ್ಟೆ. 

ತುಮಕೂರಿನ ಬಗ್ಗೆ ಬನ್ನಿ ತಿಳಿಯೋಣ....✍

👉 1. “ತುಮಕೂರು” ಈ ಹೆಸರು ಹೇಗೆ ಬಂತು ಎಂದು ಯಾರಿಗಾದರೂ ಗೊತ್ತೇ ?

ಹಿಂದಿನ ಕಾಲದಲ್ಲಿ ‘ತುಂಬೆ ಊರು’ ಎಂದು ಕರೆಯುತ್ತಿದ್ದರು.

ಆ ಊರಿನ ತುಂಬೆಲ್ಲಾ ತುಂಬೆ ಹೂವಿನ ಗಿಡಗಳುಇದ್ದವು ಮತ್ತು ತಮಟೆ ವಾದ್ಯದ ಘೋಷ್ಠಿ ಎಲ್ಲರಿಗೂ ಚಿರಪರಿಚಿತವಾಗಿತ್ತುಆದ್ದರಿಂದ ತುಮಕೂರು ಎಂದು ಹೆಸರು ಬಂತು.


👉 2.ತುಮಕೂರನ್ನು “ ಕಲ್ಪತರು ನಾಡು”ಎಂದು ಕರೆಯುತ್ತಾರೆ ಏಕೆಂದರೆ ಈ ಜಿಲ್ಲೆಯಲ್ಲಿ ತೆಂಗಿನ ಮರಗಳು ಜಾಸ್ತಿ ಇವೆ ಮತ್ತು ರೈತರೂ ಕೂಡ ಅಧಿಕವಾಗಿ ತೆಂಗಿನ ಮರವನ್ನೇ ಕೃಷಿಗಾಗಿ ಬೆಳೆಯುತ್ತಾರೆ.

👉 3 ತುಮಕೂರನ್ನು “ಶೈಕ್ಷಣಿಕ ನಾಡು”ಎಂದು ಕೂಡ ಕರೆಯುತ್ತಾರೆಏಕೆಂದರೆ ಇಲ್ಲಿನ ಶಿಕ್ಷಣದ ವ್ಯವಸ್ಥೆ ಚೆನ್ನಾಗಿದೆಅಧಿಕ ಶಿಕ್ಷಣ ಸಂಸ್ಥೆಗಳು ಇಲ್ಲಿವೆ.

ಅವು • ವಿದ್ಯಾ ವಾಹಿನಿ ಸಂಸ್ಥೆ • ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆ, • ಸಿದ್ದಾರ್ಥ ಇಂಜಿನೀರಿಂಗ್ ಕಾಲೇಜು. • ಸಿದ್ದಗಂಗಾ ಶಿಕ್ಷಣ ಸಂಸ್ಥೆ. • ಸಿದ್ದಗಂಗಾ ಇಂಜಿನೀರಿಂಗ್ ಕಾಲೇಜು.

• ಶ್ರೀದೇವಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆ.

• ಶ್ರೀದೇವಿ ಇಂಜಿನೀರಿಂಗ್ ಕಾಲೇಜು.


ಈ ಮೂರು ಸಂಸ್ಥೆಗಳಲ್ಲಿ ಚಿಕ್ಕ ಮಕ್ಕಳುಶಾಲೆಯಿಂದ ಹಿಡಿದು ಅವರ ವೃತ್ತಿ ಶಿಕ್ಷಣದವರೆಗೂ ಇಲ್ಲಿಯೇ ಓದಬಹುದು,ಎಲ್ಲಾ ಡಿಗ್ರಿ ಕೋರ್ಸ್ಗಳನ್ನು ಒಳಗೊಂಡಿವೆ.

ಎಚ್. ಎಂ. ಸ್. ಐ. ಟಿ.  ಇಂಜಿನೀರಿಂಗ್ವಿದ್ಯಾ ಸಂಸ್ಥೆ ಜಿಲ್ಲೆಯ ನಗರದ ಹೊರಗೆಸ್ಥಾಪನೆ ಗೊಂಡಿದೆ.

👉4. “ಕೈಗಾರಿಕ ನಗರ” ವೆಂದು ಕೂಡ ಪ್ರಸಿದ್ಧಿಯನ್ನು ಹೊಂದಿದೆ. ಇಲ್ಲಿ 24 ದೊಡ್ಡ ಕಾರ್ಖಾನೆಗಳನ್ನು ಹೊಂದಿದೆ.

👉5.ತುಮಕೂರಿನಲ್ಲಿ ಅತೀ ದೊಡ್ಡ (Mega FOOD Park) ಆಹಾರ ಪಾರ್ಕ್ ಇದುತುಮಕೂರಿನ ಹೊರ ಹೊಲಯದಲ್ಲಿ ವಸಂತನರಸಾಪುರ ಕೈಗಾರಿಕ ಪ್ರದೇಶದಲ್ಲಿ ಸ್ಥಾಪಿತವಾಗಿದೆ. ಇದನ್ನು ಪ್ರಧಾನಿ ಮೋದಿಯವರು ಬಂದು ಉದ್ಘಾಟನೆ ಮಾಡಿದ್ದರು.

👉6.ತುಮಕೂರಿನಿಂದ 5 ಕಿಲೋಮೀಟರ್ ದೂರವಿರುವ ಕ್ಯಾತಸಂದ್ರ ದಲ್ಲಿ ಸಿದ್ದಗಂಗಾ ಮಠವಿದೆ ಇಲ್ಲಿ ‘ನಡೆದಾಡುವ ದೇವರು’ ಎಂದೇ ಪ್ರಸಿದ್ದರಾಗಿರುವ ಶ್ರೀಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ನೆಲೆ ಇರುವ ಸ್ಥಳ‌. ಇಲ್ಲಿ ಬಡ ಮಕ್ಕಳಿಗೆ ಉಚಿತ ವಸತಿ, ಊಟ, ಶಿಕ್ಷಣವನ್ನು ನೀಡುತ್ತಾರೆ. ವರ್ಷಕ್ಕೊಮ್ಮೆ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ, ಇದರಲ್ಲಿದನಗಳ ಜಾತ್ರೆಯೂ ವಿಶೇಷವಾಗಿದೆ.

👉7.ಇಲ್ಲಿ ಮೊದಲಿಗೆ 1025 ರಲ್ಲಿ ‘ ಗಂಗರು’ವಾಸವಾಗಿದ್ದರು ಆಗ ತುಮಕೂರು ಅವರಆಳ್ವಿಕೆಯಲ್ಲಿತ್ತು.

👉8.ಅವರ ನಂತರ ರಾಷ್ಟ್ರಕೂಟರು, ಚಾಲುಕ್ಯರು, ಮತ್ತು ನೊಳಂಬರು ಬಹಳ ವರ್ಷಗಳ ವರೆಗೂ ಆಳ್ವಿಕೆಯನ್ನು ನಡೆಸಿದ್ದಾರೆ.

👉9. 17 ನೇ ಶತಮಾನದ ನಂತರ 18 ಮತ್ತು 19 ನೇ ಶತಮಾನದಲ್ಲಿ ಮೈಸೂರಿನ ಒಡೆಯರುಆಳಿದ್ದರು.

👉10.ತುಮಕೂರಿನ ಗುಬ್ಬಿ ತಾಲ್ಲೂಕಿನಲ್ಲಿ 610 ಎಕರೆ ಪ್ರದೇಶದಲ್ಲಿ ಎಚ್.ಎ. ಎಲ್.ಇದೆ ಇಲ್ಲಿಹೆಲಿಕಾಪ್ಟರ್ ತರಬೇತಿಯೂ ಇದೆ.

👉11.ತುಮಕೂರಿನ ಪಾವಗಡ ದಲ್ಲಿ 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ, 790ಕೋಟಿಯನ್ನು ಖರ್ಚು ಮಾಡಿ ,11,000 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. 👉12.ಅತೀ ಹೆಚ್ಚು ತೆಂಗು ಬೆಳೆಯುವ ನಾಡು ತುಮಕೂರು.

👉13.ಅತೀ ಹೆಚ್ಚು ಅಡಿಕೆ ಬೆಳೆಯುವ ನಾಡು.

👉14.ಅತೀ ಹೆಚ್ಚು ಭತ್ತ ಬೆಳೆಯುವ ನಾಡು.

👉15.ತುಮಕೂರಿನ ಪಾವಗಡ ದಲ್ಲಿ ಪ್ರಸಿದ್ದಿಪಡೆದಿರುವ 600 ವರ್ಷಗಳ ಇತಿಹಾಸವಿರುವಶನಿ ದೇವರ ದೇವಸ್ಥಾನ ವಿದೆ.

👉16.ತುಮಕೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ 86 ಅಡಿಗಳಷ್ಟು ದೊಡ್ಡದಾದ ಆಂಜನೇಯ ಸ್ವಾಮಿಯ ಮೂರ್ತಿ ಬಹು ಆಕರ್ಷಣೆಯನ್ನು ಹೊಂದಿದೆ.

👉17.ತುಮಕೂರಿನ ತಿಪಟೂರು ತಾಲ್ಲೂಕಿನಲ್ಲಿ ತಾಯಿ ಚೌಡೇಶ್ವರಿ ದೇವಿಯ ಪುರಾತನ ದೇವಸ್ಥಾನವಿದೆ.🙏

👉18.ತುಮಕೂರಿನ ಕೊರಟಗೆರೆ ತಾಲೂಕಿನಲ್ಲಿ ಸುಪ್ರಸಿದ್ಧ

ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನವಿದೆ.

👉19.ತುಮಕೂರಿನ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಯ ಜಾತ್ರೆ ಬಹಳ ದೊಡ್ಡ ಜಾತ್ರೆಯಾಗಿದ್ದು ವಿಜೃಂಭಣೆಯಿಂದ ನಡೆಯುತ್ತದೆ.

👉20.ಇಲ್ಲಿನ ಪ್ರೇಕ್ಷಣೀಯ ಸ್ಥಳಗಳು

• ಸಿದ್ದಗಂಗೆ. • ಶಿವಗಂಗೆ. • ನಾಮದ ಚಿಲುಮೆ. • ದೇವರಾಯನ ದುರ್ಗ. • ಗೂಳೂರು ಗಣಪತಿ ದೇವಾಲಯ • ಕೈದಾಳ ದೇವಾಲಯ


👉21.ಗುಬ್ಬಿ ವೀರಣ್ಣ ನವರು ನಮ್ಮ ಕನ್ನಡ ಚಿತ್ರರಂಗದ ಕಲೆಯನ್ನು ಬೆಳಕಿಗೆ ತಂದವರು ಮತ್ತು ನಾಟಕದ ನಿರ್ದೇಶಕರಾಗಿದ್ದವರು ಹುಟ್ಟಿದ ನಾಡಿದು.

👉22.ರಂಗಾಯಣ ರಘು ಇತ್ತೀಚಿನ ಸಿನೆಮಾ ಗಳಲ್ಲಿ ಹಾಸ್ಯ ಪಾತ್ರವನ್ನು ಮಾಡುವ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡು

ಇಡೀ ಕರ್ನಾಟಕ ದಲ್ಲೇ ಹೆಸರುವಾಸಿ ಯಾಗಿದ್ದರೆ ಅವರು ಕೂಡ ಇಲ್ಲಿಯವರೇ.

👉23. ರಾಜರಾಮಣ್ಣ ನವರಂತಹ ಭೌಗೋಳಿಕ ತಜ್ಞರು ಹುಟ್ಟಿದ ಜಿಲ್ಲೆಯಿದು.

👉24.ಅಮರಶಿಲ್ಪಿ ಜಕಣಾಚಾರಿ ಕಲ್ಲುಗಳ ಕೆತ್ತನೆಯ ಮೂಲಕ ಜಗತ್ ಪ್ರಸಿದ್ಧ ಶಿಲ್ಪಿಯಾದವರು ಇದೇ ಜಿಲ್ಲೆಯವರು.

👉25.ಆಯುರ್ವೇದ ವನಸಿರಿಯನ್ನು ಹೊಂದಿ ಸುಮಾರು ಒಂದು ಸಾವಿರ ಔಷಧಿ ಗಿಡಗಳನ್ನು ಹೊಂದಿರುವ ಆಯುರ್ವೇದ ಸಸ್ಯ ವನ ಇದೇ ತುಮಕೂರಿನ ನಾಮದ ಚಿಲುಮೆಯ ಪಕ್ಕದಲ್ಲಿದೆ.

👉26.ತುಮಕೂರಿನ ಸ್ವರ್ಗ ಎಂದೇ ಕರೆಯುವ ನಾಮದ ಚಿಲುಮೆ

ಇಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ ಬಂದು ಹೋಗಿರುವ ಗುರುತು ಹಾಗೆಯೇ ಇದೆ.

ಅದೇ ನಾಮದ ಚಿಲುಮೆ ಇಲ್ಲಿ ಕಲ್ಲುಗಳಿಂದ ನೀರು ಜಿನುಗುತ್ತದೆ.

ಇದೇ
ಶ್ರೀರಾಮರು ಬಂದಿರುವುದಕ್ಕೆ ಕುರುಹಾಗಿದೆ.

👉27.ದೇವರಾಯನದುರ್ಗ ಇದು ಒಂದು ಪ್ರೇಕ್ಷಣೀಯ ಸ್ಥಳವಾಗಿದ್ದು ಇಲ್ಲಿ

ಲಕ್ಷ್ಮಿ ನರಸಿಂಹಸ್ವಾಮಿ. ಭೋಗಾನರಸಿಂಹ ಸ್ವಾಮಿ, ಯೋಗಾ ನರಸಿಂಹಸ್ವಾಮಿಯ ದೇವಸ್ಥಾನ ವಿದೆ.🙏  

👉28.ಜಯಮಂಗಳಾ ನದಿ ಮತ್ತು ತೀತಾ ನದಿ ಹುಟ್ಟಿದ ನಾಡು.

👉29.ಶಿವಗಂಗೆ ಶಿವಲಿಂಗದ ಆಕಾರವನ್ನೇ ಹೋಲುವ ಬೆಟ್ಟವಿದ್ದು ಅದೇ ಶಿವಗಂಗೆ..

👉30.ಮಧುಗಿರಿ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಸ್ಥಳ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ೧೦೭ ಕಿ.ಮೀ. ದೂರದಲ್ಲಿದೆ. ಇದು ಏಷ್ಯಾದ ಎರಡನೇ ಅತಿದೊಡ್ಡ ಏಕಶಿಲಾಬೆಟ್ಟವಾಗಿದೆ. ಇದು ಪಾವಗಡದಿಂದ ಬಳ್ಳಾರಿಯವರೆಗೆ ಹರಡಿರುವ ಪರ್ವತ ಶ್ರೇಣಿಯ ಭಾಗವಾಗಿದೆ. ಇಲ್ಲಿ ೧೭ನೇ ಶತಮಾನದಲ್ಲಿ ನಿರ್ಮಾಣವಾದ ಕೋಟೆ ಇದೆ. ಇದು ಸಮುದ್ರ ಮಟ್ಟದಿಂದ ೩೯೮೫ ಅಡಿ (೧೧೯೩ ಮೀಟರ್)ಗಳಷ್ಟು ಎತ್ತರವಿದೆ. ಇದು ಒಂದು ಚಾರಣದ ಸ್ಥಳವಾಗಿದೆ. ಸುತ್ತಲಿನ ಪ್ರದೇಶವು ಗಣಿಗಾರಿಕೆಯ ತಾಣವಾಗಿದೆ ಮಧುಗಿರಿ ಕೋಟೆಯನ್ನು ಕಟ್ಟಿಸಿದವರು ಸ್ಥಳೀಯ ಪಾಳೇಗಾರರಾಗಿದ್ದ ರಾಜಾ ಹಿರೇಗೌಡ. ೧೬೭೦ರ ಸುಮಾರಿಗೆ ಈ ಕೋಟೆಯನ್ನು ಮಟ್ಟಿನಿಂದ ನಿರ್ಮಿಸಲಾಗಿತ್ತು. ಅನಂತರ ಹೈದರಾಲಿ, ಟಿಪ್ಪುಸುಲ್ತಾನ್ ಹಾಗೂ ಮೈಸೂರರಸರ ಆಳ್ವಿಕೆಯಲ್ಲಿ ಕೋಟೆ ಪುನರುಜ್ಜೀವನಗೊಂಡಿತು. ಬೆಟ್ಟದ ತಳದಲ್ಲಿ ನಾಲ್ಕು ಗುಹೆಗಳಿವೆ. ಭೀಮನ ದೊಣೆ, ನವಿಲು ದೊಣೆ ಎಂಬ ಎರಡು ಕೆರೆಗಳೂ ಇವೆ. ಮಧುಗಿರಿ ಬೆಟ್ಟದ ತುತ್ತತುದಿಯಲ್ಲಿ ಹಿಂದೆ ಇತ್ತೆಂದು ಹೇಳಲಾಗುವ ಗೋಪಾಲಕೃಷ್ಣ ದೇವಾಲಯ ಈಗ ಪಾಳುಬಿದ್ದಿದೆ.

👉31ಸಿದ್ಧರ ಬೆಟ್ಟ. ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದಿರುವ ಸಿದ್ಧರ ಬೆಟ್ಟವನ್ನು ಸಿದ್ಧಗಿರಿ, ಸುವರ್ಣಗಿರಿ ಎಂದೂ ಕರೆಯುತ್ತಾರೆ. ಸದಾ ಹಸಿರಿನಿಂದ ಕೂಡಿರುವ ಈ ಬೆಟ್ಟ ನಿಸರ್ಗದ ಅಪ್ಪುಗೆಯಲ್ಲಿದೆ. ಸುತ್ತಮುತ್ತಲ ಗಿರಿಶಿಖರ ಕಣಿವೆಗಳು ಕಣ್ಮನ ಸೆಳೆಯುತ್ತವೆ. ಪ್ರಕೃತಿಯ ರಮ್ಯತಾಣ ಶ್ರೇಷ್ಠ ಆರೋಗ್ಯಧಾಮ. ಇಲ್ಲಿನ ಪ್ರಕೃತಿಯ ಸೌಂದರ್ಯವಂತೂ ವರ್ಣಿಸಲಸದಳ. ಅಸಂಖ್ಯಾ ವನರಾಜಿಯಿಂದ ವೈವಿಧ್ಯಮಯ ಸಸ್ಯಗಳಿಂದ ಕಂಗೊಳಿಸುತ್ತಿದೆ. ವನಸ್ಪತಿಗಳ ನೆಲೆಮನೆ.

ಬೆಟ್ಟದ ಮೇಲೆ ಪ್ರಾಚೀನ ಕಾಲದ ಹಲವಾರು ಗುಹೆಗಳಿವೆ. ಋಷಿ-ಮುನಿಗಳು ಗುಹೆಯಲ್ಲಿ ತಪಸ್ಸಾನ್ನಾಚರಿಸಿರುವ ಕುರುಹುಗಳೂ ಇಂದಿಗೂ ಇವೆ. ಹೀಗಾಗಿ ಧಾರ್ಮಿಕ ಮತ್ತು ಪುರಾತತ್ವಕ್ಕೆ ಹೆಸರಾಗಿದೆ. ಸುವರ್ಣ ಗವಿ, ಬೂದು ಕವಿ, ಬಂಗಾರದ ಗಿಂಡಿ ಗವಿ, ಯೋಗ ಸಾಧನೆಯ ಗದ್ದುಗೆ, ಲಕ್ಷ್ಮಿದೇವಿಯ ಗದ್ದುಗೆ ಮುಂತಾದ ಪವಿತ್ರ ಸ್ಥಳಗಳಿವೆ. ಸುವರ್ಣ ಗವಿಯಲ್ಲಿ ಹಲವಾರು ಹೆಬ್ಬಂಡೆಗಳಿವೆ. ಇಲ್ಲಿ ಶ್ರೀ ಸಿದ್ದೇಶ್ವರರ ಸಮಾಧಿಯ ಮೆಲೆ ಲಿಂಗ ಪ್ರತಿಷ್ಠಾಪಿಸಿದ್ದಾರೆ. ಇದೇ ಸಿದ್ದೇಶ್ವರ. ಲಿಂಗದ ಮುಂದೆ ಚೌಕಾಕಾರದ ನೀರಿನ ಚಿಲುಮೆ ಇದೆ. ಇದೇ ಸುವರ್ಣಮುಖೀ ನದಿಯ ಉಗಮ ಸ್ಥಾನ. ಹಾಗಾಗಿ ಸುವರ್ಣ ಗವಿ ಎಂದೂ ಹೆಸರಾಗಿದೆ ಈ ಗವಿಗೆ. ಈ ನೀರಿನಲ್ಲಿ ಔಷಧೀಯ ಗುಣವಿದೆ. ವನರಾಜಿಗಳ ಮಧ್ಯೆ ನದಿ ಉಗಮವಾಗುವುದರಿಂದ ಸಹಜವಾಗಿಯೇ ರೋಗ-ನಿರೋಧಕ ಗುಣವನ್ನು ಹೊಂದಿದೆ. ಚರ್ಮರೋಗ, ಬೆನ್ನುಸಿ, ಮೈಕೈ ನೋವಿನ ನಿವಾರಣೆಗೆ ನೀರನ್ನು ಬಳಸುತ್ತಾರೆ. ಈ ಗವಿಯಲ್ಲೇ ಮತ್ತೊಂದು ಗವಿ ಇದೆ. ಟಾರ್ಚ್‌ನ ಸಹಾಯದಿಂದ ಒಳ ಹೋಗಬೇಕು. ದೊಡ್ಡದಾದ ಗುಹೆ ಇದು. ನೀರಿನ ಹರಿವಿದೆ. ಹಿಂದೆ ತಪ್ಪಸ್ಸಾನ್ನಾಚರಿಸಿ ಹಾಗೇ ಲಿಂಗೈಕ್ಯರಾದ ಮುನಿಗಳ ಅಸ್ತಿ ಪಂಜರ ಇಂದಿಗೂ ಗೋಚರಿಸುತ್ತದೆ. ಬೆಟ್ಟವು 2650 ಅಡಿ ಎತ್ತರವಿದೆ. ಬೆಟ್ಟದ ಮೇಲೆ ನಿಂತು ನೋಡಿದಾಗ ಸುತ್ತಲೂ ಪರ್ವತಗಳೇ. ಚನ್ನರಾಯನ ದುರ್ಗ, ದೇವರಾಯನ ದುರ್ಗ, ಮಧುಗಿರಿ ಬೆಟ್ಟಗಳ ಪಕ್ಷಿನೋಟ ನೋಡಬಹುದು. ಕಣ್ಣು ಹಾಯಿಸಿದಷ್ಟು ದೂರವೂ ತೆಂಗು-ಕಂಗುಗಳ ನೋಟ, ಪ್ರೇಕ್ಷಣೀಯ, ಧಾರ್ಮಿಕ ಪುರಾತತ್ವ ಸ್ಥಳವಿದು. ಕವಿಯೂ ತನ್ನ ಶಬ್ದ ಪುಂಜದಲ್ಲಿ ವರ್ಣಿಸಲಾಗದ್ದನ್ನು ಪ್ರಕೃತಿ ತನ್ನ ಸೌಂದರ್ಯದಲ್ಲಿ ಗಿಡ-ಮರಗಳಾಗಿ ಅರಳಿಸಿದೆ. ವೈವಿಧ್ಯಮಯವಾದ ವನಸ್ಪತಿಗಳಿಂದ ಕೂಡಿದ್ದು ಸಸ್ಯಶಾಸ್ತ್ರಜ್ಞರಿಗೆ ಆಯುರ್ವೇದ ಅಧ್ಯಯನ ಮಾಡುವವರಿಗೆ ಇದು ಸ್ವರ್ಗ ಸಮಾನ.

ಸ್ಥಳ ಪುರಾಣದ ಪ್ರಕಾರ ಶ್ರೀ ರಾಮ - ರಾವಣರ ಯುದ್ಧದಲ್ಲಿ ಲಕ್ಷ್ಮಣ ಮೂರ್ಛೆಗೊಂಡಾಗ ಹನುಮಂತ ಸಂಜೀವಿನಿ ಪರ್ವತವನ್ನೆತ್ತಿಕೊಂಡು ಬರುತ್ತಾನೆ. ಹಾಗೇ ಬರುವಾಗ ಸಂಜೀವಿನಿ ಪರ್ವತದ ತುಣುಕೊಂದು ಸಿದ್ಧರ ಬೆಟ್ಟದ ಮೇಲೆ ಬಿದ್ದಿತೆಂದು ಪ್ರತೀತಿ.

ಮಧುಗಿರಿಯ ಮಹಾ ನಾಡಪ್ರಭು ಇಮ್ಮಡಿ ಚಿಕ್ಕಪ್ಪ ಗೌಡನ ಸೇನಾನಿ ಕುರಂಗನಾಯಕ 16ನೇ ಶತಮಾನದ ಆದಿಯಲ್ಲಿ ಇಲ್ಲಿ ಕೋಟೆ ಕೊತ್ತಲ ಕಟ್ಟಿಸಿ ಆಳ್ವಿಕೆ ನಡೆಸುತ್ತಿದ್ದ. ಆತನ ಪಟ್ಟದಾನೆಗೆ ಕಣ್ಣು ಕುರುಡಾಯಿತು. ಆನೆಯನ್ನು ಬೆಟ್ಟದ ಮೇಲೆ ಬಿಟ್ಟುಬಿಟ್ಟರು. ಬೆಟ್ಟದಲ್ಲಿನ ಹುಲ್ಲು-ಸೊಪ್ಪುಗಳನ್ನು ಐದಾರು ತಿಂಗಳ ಕಾಲ ತಿಂದ ನಂತರ ಆನೆಗೆ ಪುನಃ ದೃಷ್ಟಿ ಮರಳಿ ಬಂದಿತು. ಕೋಟೆಯ ಅವಶೇಷಗಳು ಇಂದಿಗೂ ಇವೆ. ಬೆಟ್ಟ ಹತ್ತುವಾಗ ಬಲಬದಿಯ ಗಿಡ-ಮರದ ಎಲೆಯನ್ನು, ಇಳಿಯುವಾಗ ಎಡಬದಿಯ ಎಲೆಗಳನ್ನು 48 ದಿನಗಳ ಕಾಲ ತಿನ್ನುತ್ತಾ ಬಂದರೆ ಎಂತಹ ರೋಗಗಳೂ ಕೂಡ ನಾಶವಾಗುತ್ತವೆಯೆಂಬ ಪ್ರತೀತಿ.

ಇದೊಂದು ವಿಶ್ರಾಂತಿಧಾಮ. ಪ್ರಕೃತಿಯ ಸೌಂದರ್ಯದ ಮಡಿಲಲ್ಲಿರುವ ಬೇಸಿಗೆಯ ತಂಪು ತಾಣ. ಪ್ರಕೃತಿಯು ಈಗಲೂ ತನ್ನ ಗತಕಾಲದ ಸೊಬಗನ್ನು ಉಳಿಸಿಕೊಂಡಿದೆ. ಬೆಟ್ಟದ ಬುಡದಲ್ಲಿ ಸಿದ್ಧೇಶ್ವರ ದೇವಾಲಯ, ಮಠವಿದೆ. ಪ್ರತಿ ಸೋಮವಾರ ಔಷಧವನ್ನು ಕೊಡುತ್ತಾರೆ. ಕೆಳಗಿನ ಮಠದಲ್ಲಿ ಪ್ರತಿನಿತ್ಯ ದಾಸೋಹವಿದೆ.

ತುಮಕೂರಿನ ತೋವಿನಕೆರೆ ಮಾರ್ಗವಾಗಿ ತುಂಬಾಡಿಗೆ ಹೋಗುವ ರಸ್ತೆಯಲ್ಲಿದೆ. ಜಿಲ್ಲೆಯಿಂದ 35 ಕಿ.ಮೀ. ಅಂತರದಲ್ಲಿದೆ. ನಗರ ಜೀವನದಿಂದ ಬೇಸತ್ತವರಿಗೆ ಸಿದ್ಧರ ಬೆಟ್ಟದ ಸೌಂದರ್ಯ ಪುನಃ ಚೇತನ ನೀಡುತ್ತದೆ. ಟಾಪ್ ಪ್ರತಿಕ್ರಿಯೆಗಳು

ಸಿದ್ಧರ ಬೆಟ್ಟ ನಿಜಕ್ಕೂ ಒಂದು ಉತ್ತಮವಾದ ಪ್ರವಾಸಿ ತಾಣ. ಒಂದು ದಿನದ ಪ್ರವಾಸ (ಪಿಕ್ನಿಕ್) ಕ್ಕೆ ಯೋಗ್ಯವಾದ ಸ್ಥಳ.

👉32ಚನ್ನರಾಯನ ದುರ್ಗ, ತುಮಕೂರು ಜಿಲ್ಲೆ ಯ ಮತ್ತೊಂದು ಪ್ರಸಿದ್ಧ ತಾಣ ಮಧುಗಿರಿಯ ಸಮೀಪವೇ ಇರುವ ಪುಟ್ಟ ಹಳ್ಳಿ.

ಇತಿಹಾಸ ಸಂಪಾದಿಸಿ ಸಮುದ್ರಮಟ್ಟದಿಂದ ಮೂರೂಮುಕ್ಕಾಲು ಸಾವಿರ ಅಡಿ ಎತ್ತರದಲ್ಲಿರುವ ಇಲ್ಲಿನ ಕೋಟೆಯನ್ನು ಮೊದಲಿಗೆ ಕಟ್ಟಿದವನು ಮಧುಗಿರಿಯ ಪಾಳೇಗಾರ ವಂಶಕ್ಕೆ ಸೇರಿದ ಚಿಕ್ಕಪ್ಪ ಗೌಡ ಎಂದು ಇತಿಹಾಸ ಹೇಳುತ್ತದೆ. ಬಹಳಷ್ಟು ವರ್ಷಗಳ ಕಾಲ ಈ ಕೋಟೆ ಮಧುಗಿರಿಯ ಪಾಳೇಗಾರರ ವಶದಲ್ಲೇ ಇತ್ತಂತೆ. ಮಧುಗಿರಿ ಮರಾಠರ ಆಕ್ರಮಣಕ್ಕೆ ತುತ್ತಾದಾಗ ಈ ಕೋಟೆ ಕೂಡ ಅವರ ಕೈವಶವಾಯಿತು.

ಚಿಕ್ಕದೇವರಾಯ ಒಡೆಯರ ಆಳ್ವಿಕೆಯಲ್ಲಿ ಚನ್ನರಾಯನದುರ್ಗ ಮೈಸೂರು ಸಂಸ್ಥಾನದ ಭಾಗವಾಯಿತು. ಆಗ ಇಲ್ಲಿಗೆ ಪ್ರಸನ್ನಗಿರಿ ಎಂಬ ಹೆಸರಿತ್ತಂತೆ. ನಡುವೆ ಮತ್ತೊಮ್ಮೆ ಮರಾಠರ ಪಾಲಾದ ಈ ದುರ್ಗ ಚಂದ್ರಾಯದುರ್ಗವೆಂದೂ ಕರೆಸಿಕೊಂಡಿತ್ತು, ಮರಾಠಾ ಸೇನಾಧಿಕಾರಿಗಳಾದ ಶ್ರೀಪಂತ ಪ್ರಧಾನ ಹಾಗೂ ಮಾಧವರಾಯ ಬಲ್ಲಾಳ ಪ್ರಧಾನರ ಹೆಸರಿನಲ್ಲಿರುವ ೧೭೬೬ರ ಶಿಲಾಶಾಸನವನ್ನು ಕೋಟೆಯ ದ್ವಾರದಲ್ಲಿ ಈಗಲೂ ಕಾಣಬಹುದು.

ಟಿಪ್ಪುವಿನ ಪ್ರಾಬಲ್ಯದ ಸಮಯದಲ್ಲಿ ಚನ್ನರಾಯದುರ್ಗ ಮತ್ತೆ ಮೈಸೂರು ಸಂಸ್ಥಾನಕ್ಕೆ ಸೇರಿತು. ಅಂತಿಮವಾಗಿ ಮೂರನೆಯ ಮೈಸೂರು ಯುದ್ಧದ ಸಂದರ್ಭದಲ್ಲಿ ಲೆಫ್ಟಿನೆಂಟ್ ಕರ್ನಲ್ ಮ್ಯಾಕ್ಸ್‌ವೆಲ್ ಎಂಬಾತನ ನೇತೃತ್ವದಲ್ಲಿದ್ದ ಬ್ರಿಟಿಷ್ ಸೇನೆ ಈ ದುರ್ಗವನ್ನು ಆಕ್ರಮಿಸಿಕೊಂಡಿತು.

ನಂತರದ ದಿನಗಳಲ್ಲಿ ತನ್ನದೇ ಹೆಸರಿನ ತಾಲೂಕಿನ ಕೇಂದ್ರವಾಗಿದ್ದ ಚನ್ನರಾಯನ ದುರ್ಗ ಈಗ ಪುಟ್ಟದೊಂದು ಅಜ್ಞಾತ ಹಳ್ಳಿಯಾಗಿ ಉಳಿದುಕೊಂಡಿದೆ. ಇಲ್ಲಿಗೆ ಬರುವ ಪ್ರವಾಸಿಗರು ಕಡಿಮೆಯಾದರೂ ಐತಿಹಾಸಿಕ ಸ್ಮಾರಕಗಳನ್ನು ಹಾಳುಗೆಡವುವ ನಿಧಿಶೋಧಕರ ಪೀಡೆ ಮಾತ್ರ ತಪ್ಪಿಲ್ಲ.

👉ಹೀಗೆ ಇನ್ನೂ ಹಲವು ವಿಶೇಷತೆಗಳನ್ನು ಒಳಗೊಂಡಿದೆ ನಮ್ಮ ತುಮಕೂರು ಜಿಲ್ಲೆ.