ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ

ಆದಿಜಗಕ್ಕೆಲ್ಲ ಮೊದಲ ಹುಟ್ಟಿದ ಕುರುಬ ಕುಲದ ಕುಲಗುರು ಮತ್ತು ಆದಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಪರಮ ಆರಾಧಕರಾಗಿದ್ದ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕಿನ ಹರ್ತಿಕೋಟೆಯ ಶ್ರೀ ಗುರುಸಿದ್ದಯ್ಯ ಒಡೆಯರ್ ಮತ್ತು ಶ್ರೀಮತಿ ರುದ್ರಾಯಣಮ್ಮ ದಂಪತಿಯ ಪವಿತ್ರ ಉದರದಲ್ಲಿ ನಾಲ್ಕನೇ ಮಗುವಾಗಿ ಶ್ರೀ ರೇವಣಸಿದ್ದೇಶ್ವರ ಕಾರುಣ್ಯದಿಂದ 10 ಏಪ್ರಿಲ್ 1977 ರ ಶಿವ ಯೋಗದಲ್ಲಿ ಶ್ರೀ ವಿಕ್ರಮ ಸಂವತ್ಸರದ ಹೊಸ ವಸಂತದಲ್ಲಿ ಅವತರಿಸಿದ ಜನ್ಮ ತಾಳಿದವರು ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಹಾಲುಮತ ಸಮಾಜದ ಧರ್ಮಗುರುಗಳಾಗಿದ್ದ ಪೋಷಕರ ಸಚ್ಚಾರಿತ್ರ್ಯ, ಸದಾಚಾರ, ಸಂಸ್ಕಾರ, ಸದ್ಗುಣ, ನಿಷ್ಕಾಮ ಕರ್ಮಗಳು ಬಾಲ್ಯದಲ್ಲಿಯೇ ಶ್ರೀಗಳ ಮೇಲೆ ಪ್ರಭಾವ ಬೀರಿ, ಅಪ್ಪಟ ದೈವಭಕ್ತರನ್ನಾಗಿಸಲು  ನಾಗಿಸಲು ಪೂರ್ವಾಶ್ರಮದ ಪರಿಸರವೇ ಪ್ರೇರಣೆಯಾಯಿತು.